ಕ.ರಾ.ರ.ಸಾ.ನಿಗಮದ ಬಗ್ಗೆ

ಕ.ರಾ.ರ.ಸಾ.ನಿಗಮದ ಬಗ್ಗೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕ.ರಾ.ರ.ಸಾ.ನಿ)ವು ರಸ್ತೆ ಸಾರಿಗೆ ಸಂಸ್ಥೆ ಕಾಯ್ದೆಯ 1950 ನಿಬಂಧನೆಗಳ ಅಡಿಯಲ್ಲಿ ಆಗಸ್ಟ್ 1961 ರಲ್ಲಿ ಸ್ಥಾಪಿಸಲಾಯಿತು. ಸಾಕಷ್ಟು ಸುರಕ್ಷಿತ ಮತ್ತು ಆರಾಮದಾಯಕ ಸೇವೆಯ ಮುಖಾಂತರ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯದ ಲಭ್ಯತೆ, ಕ.ರಾ.ರ.ಸಾ.ನಿಗಮವು ಸಾರ್ವಜನಿಕ ಸಾರಿಗೆ ಬೆಳೆಯುತ್ತಿರುವ ಸಮಾಜದಲ್ಲಿನ ಈ ಪ್ರಯತ್ನದಲ್ಲಿ ದೂರದ ಗುಡ್ಡಗಾಡಿನ ಪ್ರದೇಶಗಳವರೆಗೂ ಮುಖ್ಯವಾದ ಸಂಪರ್ಕ ಒದಗಿಸುತ್ತಿದೆ, ಕ.ರಾ.ರ.ಸಾ.ನಿಗಮವು ವಿಶ್ವಾಸಾರ್ಹತೆ ಮತ್ತು ಸುರಕ್ಷತೆಗೆ ಪಾತ್ರವಾಗಿ ತನ್ನ ಹೆಸರನ್ನು ಉತ್ತುಂಗಕ್ಕೆ ಕೊಂಡ್ಯೂಯ್ದಿರುತ್ತದೆ. ಆಗಸ್ಟ್ 1997 ರವರೆಗೆ, ಕ.ರಾ.ರ.ಸಾ.ನಿಗಮದಲ್ಲಿ 9500 ಅನುಸೂಚಿಗಳು ಮತ್ತು 10,400 ಬಸ್ ಗಳ ಕಾರ್ಯಚರಣೆ ಹೊಂದಿತ್ತು. ಆಗಸ್ಟ್ 1997 ರಲ್ಲಿ, ನಿಗಮವು ನಾಲ್ಕು ನಿಗಮಗಳಾಗಿ ಹೊಸದಾಗಿ ಮಾರ್ಪಾಡುಗೂಂಡು ಮೊದಲಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎಂದು ಹೊಸ ನಿಗಮವಾಯಿತು. ನಂತರ ನವೆಂಬರ್ 1997 ರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಇತ್ತೀಚೆಗೆ , ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NEKRTC)ಕ್ಕೊ ಸಹ ಗುಲ್ಬರ್ಗಾದಲ್ಲಿ ನಿಗಮದ ಕಚೇರಿಯನ್ನು ನಿರ್ಮಿಸಲಾಯಿತು. ನಿಗಮವು ಸಾಮಾನ್ಯ, ವೇಗದೂತ, ರಾಜಹಂಸ, ಶೀತಲ್, ಅಂಬಾರಿ, ಕರ್ನಾಟಕ ವೈಭವ ಮತ್ತು ಹವಾನಿಯಂತ್ರಿತ ವೋಲ್ವೋ " ಐರಾವತ" ಬಸ್ಸುಗಳಂತ ಎಲ್ಲಾ ರೀತಿಯ ಬಸ್ಸುಗಳ ಕಾರ್ಯಚರಣೆಯನ್ನು ಮಾಡುತ್ತಿದೆ. ಕ.ರಾ.ರ.ಸಾ.ನಿಗಮವು ಇತರೆ ಹೊರ ರಾಜ್ಯ ಮುಖ್ಯ ಸ್ಥಳ ಗಳಾದ ತಿರುವನಂತಪುರ ,ಮುಂಬೈ,ಚನೈ,ತಿರುಪತಿ ಮತ್ತು ವಿಜಯವಾಡಗಳಲ್ಲಿ ವಾಹನಗಳು ಕಾರ್ಯಚರಣೆಗೂಳಿಸುತ್ತಿದೆ . ಕ.ರಾ.ರ.ಸಾ.ನಿಗಮವು ಸಮಾಜದ ಪ್ರತಿಯೊಂದು ಹಂತದಲ್ಲಿಯೂ ಸಹ ವಿವಿಧ ರೀತಿಯ ಬಸ್ ಗಳಿಂದ ಕಾರ್ಯಚರಣೆಗೂಳ್ಳುತ್ತದೆ. ಕ.ರಾ.ರ.ಸಾ.ನಿಗಮದ ಮುಖ್ಯ ಉದ್ದೇಶವೆಂದರೆ ಹೊಸ ಅನ್ವೇಷಣೆಗಳಲ್ಲಿ ಹೊಸ ಸವಾಲುಗಳನ್ನು ಹುಡುಕುವ ಸಲುವಾಗಿ ತನ್ನ ಇತರೆ ಮೂರು ಸಂಸ್ಥೆಗಳಾದ ಬಿ.ಎಂ.ಟಿ.ಸಿ , ವಾ.ಕ.ರಾ.ಸಾ.ಸಂ ಮತ್ತು ಈ.ಕ.ರಾ.ಸಾ.ಸಂ ಗಳೂಂದಿಗೆ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಲಾಗುತ್ತಿರುತ್ತದೆ.

ಕಛೇರಿ ಮತ್ತು ಇತರ ಸೌಲಭ್ಯಗಳು

ಕ.ರಾ.ರ.ಸಾ.ನಿಗಮವು ಬೆಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದೆ. ವಿಭಾಗೀಯ ಕಛೇರಿಗಳು: 15 (ಹೊಸದಾಗಿ ತೆರೆಯಲಾದ ಪುತ್ತೂರು ವಿಭಾಗ ಸೇರಿದಂತೆ) ಬಸ್ ಡಿಪೋಗಳು 72 , ಬಸ್ ನಿಲ್ದಾಣಗಳು: 128 ಎಲ್ಲಾ 7599 ವಾಹನಗಳ ಒಟ್ಟು ದಿನವಂದಕ್ಕೆ ಪರಿಣಾಮಕಾರಿ 24.91 ಲಕ್ಷ ಕಿ.ಮೀಗಳು, 6881 ಅನುಸೂಚಿಗಳೂಂದಿಗೆ ಕಾರ್ಯಚರಿಸುತ್ತಿದ್ದು ದಿನಕ್ಕೆ ಸರಾಸರಿ ಸಂಚಾರ ಆದಾಯ 589.78 ಲಕ್ಷ 23.60 ಲಕ್ಷ ಸರಾಸರಿ ಪ್ರಯಾಣಿಕರು ಮತ್ತು 34019 ಸಿಬ್ಬಂದಿಗಳು, 10 ಬಸ್ ಬಾಡಿಬಿಲ್ಡಿಂಗ್ ಕಾರ್ಯಗಾರಗಳು, ಒಂದು ಮುದ್ರಣಾಲಯ, 3 ಚಾಲಕ ಮತ್ತು ತರಬೇತಿ ಸಂಸ್ಥೆಗಳು ಹಾಗೂ ಇತರೆ 02 ಆಸ್ಪತ್ರೆಯನ್ನು ಹೊಂದಿದ್ದು ಮತ್ತು ಅಧಿಕಾರಿಗಳಿಗೆ /ನೌಕರರಿಗೆ 782 ಕ್ವಾರ್ಟರ್ಸ್ ಗಳು ಹಾಗೂ ಒಂದು ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ನಿಗಮವು ಹೊಂದಿರುತ್ತದೆ.

ಪ್ರಶಸ್ತಿಗಳು ಮತ್ತು ಮಾನ್ಯತೆ

  1. ಸಾರಿಗೆ ಮಂತ್ರಿಗಳ ಟ್ರೋಫಿಯನ್ನು 1998- ರಿಂದ 2011 ರವರೆಗೆ ನಿಗಮದ ವಾಹನಗಳು ಅತೀಕಡಿಮೆ ಅಪಘಾತಗಳು ದಾಖಾಲಾಗಿರುವುದಕ್ಕೆ ಸ್ವಿಕರಿಸಲಾಗಿರುತ್ತದೆ.
  2. ಕರ್ನಾಟಕ ಸರ್ಕಾರದಿಂದ 2011 ರಲ್ಲಿ ಪರಿಸರ ಪ್ರಶಸ್ತಿ ಪಡೆಯಲಾಗಿರುತ್ತದೆ.
  3. ಐ.ಆರ್.ಟಿ.ಇ ಪ್ರಿನ್ಸ್ ಮೈಕೆಲ್ ಇಂಟರ್ನ್ಯಾಷನಲ್ ರವರಿಂದ ರಸ್ತೆ ಸುರಕ್ಷತಾ ಪ್ರಶಸ್ತಿ 2002.
  4. ಚಾರ್ಟರ್ಡ್ ಇನ್ಸ್ಟಿಟ್ಯೂಟ್ ಆಫ್ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ರವರಿಂದ 2001-2002 ರ ಸುರಕ್ಷತಾ ಪ್ರಶಸ್ತಿ.
  5. ಪೆಟ್ರೋಲಿಯಂ ಸಂರಕ್ಷಣಾ ರಿಸರ್ಚ್ ಅಸೋಸಿಯೇಷನ್ ಪ್ರಶಸ್ತಿ-2001-02 ಹಾಗೂ 2002-03.
  6. ಗೋಲ್ಡನ್ ಪೀಕಾಕ್ ಪರಿಸರ ನಿರ್ವಹಣೆ ಪ್ರಶಸ್ತಿ 2003.
  7. ಗೋಲ್ಡನ್ ಪೀಕಾಕ್ ಪರಿಸರ ಇನೋವೇಷನ್ ಪ್ರಶಸ್ತಿ 2004.
  8. 2002-03 ಮತ್ತು 2003-04 ಅವಧಿಯಲ್ಲಿ ಅತ್ಯುತ್ತಮ ಸುಧಾರಣೆಗೆ (PCRA) ಪ್ರತಿಷ್ಠಿತ ರನ್ನರ್ ಅಪ್ ಪ್ರಶಸ್ತಿ ಸ್ವೀಕರಿಸಲಾಯಿತು.
  9. ಇಂಧನ ದಲ್ಲಿ ಹಾಗೂ ವಾಹನಗಳ ಕೆ.ಎಂ.ಪಿ.ಎಲ್ ನಲ್ಲಿ ಅತ್ಯುತ್ತಮ ಸಾಧನೆಗಾಗಿ ಕ.ರಾ.ರ.ಸಾ.ನಿಗಮವು 2002-03 ಮತ್ತು 2003-04 ಅವಧಿಯಲ್ಲಿ ಪ್ರಶಸ್ತಿ ಸ್ವೀಕರಿಸಲಾಯಿತು..
  10. OSHAS 18001, ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆ ನಿರ್ವಹಣಾ ವ್ಯವಸ್ಥೆಯ ಗುಣಮಟ್ಟದ ಕಡೆಗೆ ಅನುಸರಣೆಯನ್ನು ಐಎಸ್ಒ 14001 & 9001 ಕ್ಕೆ ಪಾತ್ರವಾಗಿರುತ್ತದೆ.
  11. ಇಂಜಿನಿಯರ್ಸ್ ಇನ್ಸ್ಟಿಟ್ಯೂಟ್, ದಹಲಿ ರವರಿಂದ -2006ರಲ್ಲಿ ಸುರಕ್ಷತೆ ಮತ್ತು ಗುಣಮಟ್ಟದ ಸೇವೆಗಾಗಿ ಪ್ರಶಸ್ತಿ
  12. ದುಬೈ ಮುನಿಸಿಪಾಲಿಟಿ ರವರಿಂದ ಪರಿಸರ ನಿರ್ವಹಣೆಗೆ ಭಾರತ-2006 ರ ಅಡಿಯಲ್ಲಿಅತ್ಯುತ್ತಮ ಪ್ರಶಸ್ತಿ.
  13. EMPI-ಇಂಡಿಯನ್ ಎಕ್ಸ್ಪ್ರೆಸ್ ಭಾರತೀಯ ಇನೋವೇಷನ್ ಪ್ರಶಸ್ತಿಯನ್ನು 2006ರಲ್ಲಿ ಅನೇಕ ಹೊಸ ಕ್ರಮಗಳನ್ನು ನಿಗಮವು ಅನುಸರಿಸರಿಸಿ ಯಶಸ್ವಿಯಾಗಿರುವುದಕ್ಕೆ, ಮಾಜಿ ರಾಷ್ಟ್ರಪತಿ ಡಾ. A.P.J. ಕಲಾಂ ರವರಿಂದ 22/12/2007 ರಂದು ಚಿನ್ನದ ಟ್ರೋಫಿ ಪಡೆಯಲಾಯಿತು.
  14. 'ಎಕ್ಸಲೆನ್ಸ್ ಪ್ರಶಸ್ತಿ' ಯನ್ನು 'ವಿದ್ಯುನ್ಮಾನ ಟಿಕೇಟಿಂಗ್ ಯಂತ್ರ' ಮೂಲಕ ಮೈಸೂರು ನಗರದ ಅರ್ಬನ್ ಮೊಬಿಲಿಟಿಯಲ್ಲಿ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಸುಧಾರಣೆ ಕಡೆಗೆ ಮಾಡಿದ ಉಪಕ್ರಮಗಳು ಮತ್ತು ಅನುಕರಣೀಯ ಗುರುತಿಸುವಲ್ಲಿನ ಪ್ರಯತ್ನಕ್ಕಾಗಿ ಅರ್ಬನ್ ಮೊಬಿಲಿಟಿ ಭಾರತ 2008, ದಹಲಿಯಲ್ಲಿ ನಡೆದ ಸಭೆಯಲ್ಲಿ ಪಡೆಯಲಾಗಿರುತ್ತದೆ.
  15. 'ಸ್ವಯಂಚಾಲಿತ ಎಲೆಕ್ಟ್ರಾನಿಕ್ ಡ್ರೈವಿಂಗ್ ಟೆಸ್ಟ್ ಸಿಸ್ಟಮ್' ಅನುಷ್ಠಾನಕ್ಕೆ ಅರ್ಬನ್ ಮೊಬಿಲಿಟಿ ಭಾರತ 2009, ದಹಲಿ ರಂದು ಸಭೆಯಲ್ಲಿ 5.12.2009 ರಂದು ಅರ್ಬನ್ ಮೊಬಿಲಿಟಿ ಸುಧಾರಣೆ ಕಡೆಗೆ ಮಾಡಿದ ಆದರ್ಶಪ್ರಾಯ ಗುರುತಿಸುವಲ್ಲಿನ ಪ್ರಯತ್ನವನ್ನು ಮತ್ತು ಉಪಕ್ರಮಗಳಿಗಾಗಿ 'ಎಕ್ಸೆಲೆನ್ಸ್ ಪ್ರಶಸ್ತಿ.
  16. ಪಿ.ಎನ್.ಭಗವತಿ , ಮಾಜಿ ಮುಖ್ಯ ನ್ಯಾಯಮೂರ್ತಿ, ಸದಸ್ಯರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಮತ್ತು ಅಧ್ಯಕ್ಷರು ಗೋಲ್ಡನ್ ಪೀಕಾಕ್ ಪ್ರಶಸ್ತಿ ರವರಿಂದ (AWATAR-ಯಾವುದೇ ಸಮಯದಲ್ಲಿ ಮುಂಗಡ ಕಾಯ್ದಿರಿಸುವ ಮೀಸಲಾತಿ ವ್ಯವಸ್ಥೆ) ಅನುಷ್ಠಾನಕ್ಕಾಗಿ ಗೋಲ್ಡನ್ ಪೀಕಾಕ್ ನಾವೀನ್ಯತೆಯ ಉತ್ಪನ್ನ / ಸೇವೆ ಪ್ರಶಸ್ತಿ 2010 ಸ್ವೀಕರಿಸಲಾಯಿತು.
  17. ಭಾರತ ಸರ್ಕಾರ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆ (ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ) ಸಚಿವಾಲಯ ಆಯೋಜಿಸಿದ 13 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ AWATAR ಪಿಎಸ್ಯು ನ ಮೂಲಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಅತ್ಯುತ್ತಮ ಇ-ಆಡಳಿತ ಬಳಕೆಯಲ್ಲಿ 2009-2010 ಇ-ಆಡಳಿತ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಲಾಯಿತು.
  18. Apollo-ಸಿ.ವಿ. ಪ್ರಶಸ್ತಿ ವರ್ಷದ ಅತ್ಯುತ್ತಮ ಸಾರ್ವಜನಿಕ ಬಸ್ ಫ್ಲೀಟ್ ಆಪರೇಟರ್ ಎಂದು -2010.
  19. ಕರ್ನಾಟಕ ಸರ್ಕಾರ ದಿಂದ ಕರ್ನಾಟಕ ರತ್ನ ಪ್ರಶಸ್ತಿ 2010 ರಲ್ಲಿ ಪಡೆಯಲಾಯಿತು .
  20. ನಿಗಮವು ಸಾರ್ವಜನಿಕ ಸೇವೆ ಅನುಷ್ಟಾನಗೂಳಿಸುವಿಕೆಯಲ್ಲಿ 'ರಾಷ್ಟ್ರೀಯ ದೂರಸಂಪರ್ಕ ಪ್ರಶಸ್ತಿ 2012' ಪಡೆದುಕೊಂಡಿತು
  21. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ (ASRTU) ಪ್ರಶಸ್ತಿಯನ್ನು ಕ.ರಾ.ರ.ಸಾ.ನಿಗಮ ಮತ್ತು ಬಿ.ಎಂ.ಟಿ.ಸಿ ಎರಡು ನಿಗಮಗಳು ಪಡೆದುಕೊಂಡಿರುತ್ತದೆ.